Thursday, 25 August 2016

ನಿರಾಸೆಯೆಂದರೆ ..

ಅನುಗಾಲ 
ಮರೆಯದ 
ಮರೆಯಲಾಗದ 
ನಿರಾಸೆಯೆಂದರೆ ... 
ಹಸೆಮಣೆಯೇರಿ 
ವರುಷಗಳು ಸಂದು 
ಕೊನೆಗೆ ..... 
ಕಣ್ಣಿಗೆ ಕಾಣುವ ವೈದ್ಯರ
ಕಣ್ಣಿಗೆ ಕಾಣದ ದೇವರ
ಮೊರೆಹೊಕ್ಕು
ದಕ್ಕಿದ ಭಾಗ್ಯವ .... 
ಉಬ್ಬಿದ ಉದರವ
ಮುಟ್ಟಿ
ನಗುತ ಕನಸ ಕಾಣುತ
ಕಾಲ ಕಳೆಯುತಿರಲು ...
ಕಂದನ
ಪುಟ್ಟ ಕಾಲು
ಕಾಣುವ ಮೊದಲೇ
ಭುವಿಯ ಕಾಣಲು
ಕಣ್ಣು ತೆರೆಯದೆ
ಹೊರಟ
ಕಂದಮ್ಮನಲಿ
ಇಟ್ಟಿದ್ದ
ಭರವಸೆಯ ಪತನ ... !!!

ಕೆ.ಎ. ಎಂ. ಅನ್ಸಾರಿ 

Monday, 5 May 2014

ವಿರಹ ಕವನ ... !!!

ಮನಕೆ
ತಗುಲಿದ ಗಾಯಕೆ
ಅಕ್ಷರಗಳಲಿ
ಸಾಂತ್ವನ
ಹೇಳತೊಡಗಿದೊಡೆ ....
ಅಳುವ ಮನವು
ನಗುತ
ಜನ್ಮ ನೀಡುವ
ಕೂಸು ....
ವಿರಹ ಕವನ ... !!!

ನನ್ನ ಅನುಭವ

ಮುಂದಿನ ವಾರದಿ
ನಡೆವ
ಮೊಮ್ಮಗಳ ಮದುವೆಗೆ
ಸಾಗರವ ದಾಟಿ
ಬರುವನೆನ್ನ
ಕಂದನೆಂದು
ಕಾಯುತಿದ್ದಳೆನ್ನಮ್ಮ
ಕಣ್ಣಿಗೆ ಕಣ್ಣಿಟ್ಟು ...
ತನ್ನ ಕಂದನ ಮೊಗವ
ನೋಡಲಿರುವ
ದಿನಕಿಂತ ಒಂದೆರಡು
ದಿನ ಮೊದಲೇ
ಕರೆದನವನು ...
ತನ್ನೆಡೆಗೆ
ಎನ್ನೊಡೆಯ ...
ಮೈಲುಗಳು
ಹಾರಿ ತನ್ನಮ್ಮನ
ಕಾಣ ಬಂದಾಗ
ಮಲಗಿದ್ದಳೆನ್ನಮ್ಮ ....
ತನ್ನೆರಡು
ಕಣ್ಣುಗಳ ಮುಚ್ಚಿ ....

(ನನ್ನ ಅನುಭವ)

ನಿನ್ನ ಮೊಗವರಿಕೆ ...

ನಿನ್ನ
ನೆನಪೆನ್ನ
ನೆತ್ತಿಯಲಿ
ತೂಗುತಿಹ
ರತ್ನ ಸೂಲು ..
ನಗುವದನದ
ಅನುಪಸ್ತಿತಿಯಲಿ
ಅನುದಿನವು
ಅನುಭವಿಸುವೆ
ನಿನ್ನ
ಮೊಗವರಿಕೆ ... !!!
(ಸೂಲು=ನೆತ್ತಿಯ ಆಭರಣ
ಮೊಗವರಿಕೆ = ಸ್ನೇಹ )

ಸಂಜೆಯ ಕುಳಿರ್ಗಾಳಿಯ ತಂಪು ..

ಸಂಜೆಯ 
ಸೊಬಗ ಸವಿಯಲು 
ನೀರ್ದಾಣ ದಡದಲಿ 
ಕುಳಿತು - 
ಜಲ ಚರಗಳ... 
ಬಕ - ಮರಾಲಗಳ
ಅಲೆದಾಟ
ನಲಿದಾಟ ..
ನೋಡಿ ನಗುತಿರಲು
ನಿನ್ನ ನೆನುಪುಗಳು
ಚಾಮರವಾಗಿ ಬೀಸಿ
ಕುಳಿರ್ಗಾಳಿಯ
ತಂಪು ನೀಡುತ್ತಿತ್ತು ... !!!

ನೀಲಮಣಿ ಬಹುಮಾನ ...



ಗೆಳತೀ ...
ನಿನ್ನ
ನೀಲ ಕಣ್ಣೊಳು
ನನ್ನೆಡೆಗೆ
ಮಿಟಕರಿಸಿ 
ನೋಡುವ
ನೋಟವೊಂದೇ
ಸಾಕೆನಗೆ
ನಾನೆನುವೆ
ಅದೇ ನೀ ಕೊಡುವ
ನೀಲಮಣಿ
ಬಹುಮಾನ ... 
(ನೀಲಮಣಿ =ನೀಲಿ ಬಣ್ಣದ ರತ್ನ )

ಅವಾಂತರ ..

ಅವಳ
ಪುಸ್ತಕದ ಪುಟಗಳೆಡೆಯಲ್ಲಿ
ದೊರೆತ
ನಾ ಬರೆದ ಹಳೆಯ
ಪ್ರೇಮ ಪತ್ರವನೋದಿದಾಗಲೇ 
ತಿಳಿದುದ್ದು
ನಾ ಬರೆದ ಅವಾಂತರ ...
ತೊಂಡೆ ಬೆಂಡೆ
ಬಾಳೆ ದಾಳಿಂಬೆ
ಜಿಂಕೆ ಕಣ್ಣು ...
ಅನುಪಮ ವರ್ಣನೆ . ...
ಇಂದಿನ ಸೌನ್ದರ್ಯ
ಅಂದಿನ ಉಪಮೆ ...
ಅಜಗಜಾಂತರ ... !!!