ಬಾಲ್ಯದಲಿ ಶಾಲೆಗೆ ನಡೆದ ದಾರಿಯಲಿಂದು ಪುನಃ ಹೆಜ್ಜೆಯನಿಟ್ಟಾಗ ... ದಾರಿ ನಡುವೆ ನಾ ಕಲ್ಲೆಸೆದು ನೋಯಿಸಿದ ನೆಲ್ಲಿ ಮಾವು ಹಲಸಿನ ಮರಗಳ ಪ್ರೀತಿಯ ನಗು ಮನಸು -ಹೃದಯವ ತಣಿಸಿದರೆ ... ಗೆಳೆಯನ ಮನೆಯೆದುರಿನ ಬಾವಿಯ - 'ನೀರ ಸೇದಿ ಕುಡಿದು ಸೆರಳೆ ನೀಗಿಸಿ ಒಡಲು ತುಂಬಿ ಮುನ್ನಡೆ' ಎಂಬ ಸಾದರದ ನುಡಿ ಇಂಪಾಗಿ ಕೇಳಿಸುತ್ತಿತ್ತು . ... !!!
ನನ್ನ
ಕಪ್ಪು ಬಿಳುಪಿನ
ಭಾವನೆಗಳಿಗೆ
ನೀ
ಹಚ್ಚಿದ ಬಣ್ಣವು
ನಿನ್ನ ವಿರಹದ
ಬೇಗೆಯಲಿ
ಮಾಸಿ ಹೋಗುತಿದೆ ...
ಮಗದೊಮ್ಮೆ
ಹೊಸ ಭರವಸೆಗಳ
ಹೊಸ ಕನಸುಗಳ
ಬಣ್ಣ ಹಚ್ಚಲು
ನೀ
ಬರುವಿಯೆಂದು
ಕಾಯುತಿದೆ
ಈ
ಹುಚ್ಚು ಮನಸು ... !!!
ಅಮ್ಮಾ .... ವರುಷದ ಹಿಂದೆ ನಿನ್ನ ಅಗಲಿಕೆಯ ನೋವಿಂದ ನನ್ನೀ ಮನದ ಮರದಿಂದುರುಳಿದ ಸಂತಸದ ಎಲೆ ಹಣ್ಣು ಕಾಯಿಗಳು ... ... ಹಲವು ಋತುಗಳುರುಳಿದರೂ ಮನಕೆ ಬಂದಿಲ್ಲ ವಸಂತ ... ಚೈತ್ರದ ಚಿಗುರು ... ಸುಶ್ರಾವ್ಯದಿ ಹಾಡಿ ಮನವ ತಣಿಸಬಂದಿಲ್ಲ ವಸಂತದೂತ ....... ಮನವೆಂಬುದು ಹಸಿರ ಉಡುಪು ತೊಟ್ಟ ಒಣ ಮರ .... !!! (ವಸಂತದೂತ = ಕೋಗಿಲೆ)
ಮಗದೊಮ್ಮೆ ಪ್ಯಾಟೆ ಅಂಚೆ ಕಚೇರೀಲಿ ವಿಚಾರಿಸಿದಾಗ ತಿಳಿದ್ಬಂದಿದ್ದು ಇಷ್ಟು ...
ಇಲ್ಲಿಂದ ಪಾಯಸ ದುಬೈ ಗೆ ಹೋಗ್ತಿತ್ತು .. ದುಬೈನಿಂದ ಯಾರೂ ಕಳ್ಸಿದ ಒನಕೆನೋ ಅದೇ ದಾರ್ಯಾಗ್ ಬರ್ತಿತ್ತು .. ಒನಕೆ- ಮಡಿಕೆ ಮುಖ ಮುಖೀಲಿ ಮಡಿಕೆ ಒಡೆದ್ ಹೋಗಿತ್ತು ಪಾಯಸ ಚೆಲ್ಲೋಗಿತ್ತು ... !!!
ಹರುಷವು ಹೊರಟು ವರುಷವಾಯ್ತು ಅಮ್ಮಾ .... ನಿನ್ನ ನೆನಪಿನ್ನೂ ಹೆರಸಾಗಿಲ್ಲ
ಹೆದ್ದಟ್ಟು ಮೆದುಳಿಗೆ ಸತ್ಯ ನೀತಿ ಧರ್ಮವ ತುಂಬಿಸುವ ಕಡುಗಜಕೆ ತುಡುವು ಹಿಡಿದು ಬರಡು ಹೃದಯದಲಿ ಹಸಿರು ಬೆಳೆಯಲು ಹೇತುವಾದ ನಿನ್ನ ನೆನಪು - ನಗುಮೊಗ ಮಿಂಚಿ ಮರೆಯಾಗುತಿದೆ ಪ್ರತಿ ನಿಮಿಷ ...