ಬಾಲ್ಯದಲಿ ಶಾಲೆಗೆ
ನಡೆದ ದಾರಿಯಲಿಂದು
ಪುನಃ ಹೆಜ್ಜೆಯನಿಟ್ಟಾಗ ...
ದಾರಿ ನಡುವೆ
ನಾ
ಕಲ್ಲೆಸೆದು ನೋಯಿಸಿದ
ನೆಲ್ಲಿ
ಮಾವು
ಹಲಸಿನ ಮರಗಳ
ಪ್ರೀತಿಯ ನಗು
ಮನಸು -ಹೃದಯವ
ತಣಿಸಿದರೆ ...
ಗೆಳೆಯನ
ಮನೆಯೆದುರಿನ
ಬಾವಿಯ -
'ನೀರ ಸೇದಿ ಕುಡಿದು
ಸೆರಳೆ ನೀಗಿಸಿ
ಒಡಲು ತುಂಬಿ
ಮುನ್ನಡೆ'
ಎಂಬ ಸಾದರದ ನುಡಿ
ಇಂಪಾಗಿ ಕೇಳಿಸುತ್ತಿತ್ತು . ... !!!
ನಡೆದ ದಾರಿಯಲಿಂದು
ಪುನಃ ಹೆಜ್ಜೆಯನಿಟ್ಟಾಗ ...
ದಾರಿ ನಡುವೆ
ನಾ
ಕಲ್ಲೆಸೆದು ನೋಯಿಸಿದ
ನೆಲ್ಲಿ
ಮಾವು
ಹಲಸಿನ ಮರಗಳ
ಪ್ರೀತಿಯ ನಗು
ಮನಸು -ಹೃದಯವ
ತಣಿಸಿದರೆ ...
ಗೆಳೆಯನ
ಮನೆಯೆದುರಿನ
ಬಾವಿಯ -
'ನೀರ ಸೇದಿ ಕುಡಿದು
ಸೆರಳೆ ನೀಗಿಸಿ
ಒಡಲು ತುಂಬಿ
ಮುನ್ನಡೆ'
ಎಂಬ ಸಾದರದ ನುಡಿ
ಇಂಪಾಗಿ ಕೇಳಿಸುತ್ತಿತ್ತು . ... !!!
No comments:
Post a Comment