ಕನಸುಗಳಿರಲಿ
ನಶ್ವರ ಬದುಕಿನ
ಕಷ್ಟ ನಷ್ಟಗಳ
ಸರಸ ವಿರಸಗಳ
ಚಿಂತಿಸಿ
ಕುಳಿತಿರಲು ...
ಅನತಿ ದೂರದಲ್ಲಿ
ಊರುಗೋಲಿನೊಂದಿಗೆ
ಪುಟ್ಟ ಪುಟ್ಟ ಹೆಜ್ಜೆಯನಿಟ್ಟು
ನಗುತ ನಡೆವ ಆ ಮುದಿಜೀವವ ತೋರಿಸಿ
ಗೆಳೆಯ ಹೇಳಿದನೊಂದು
ಮರ್ಮವಚನ ..
ಮಹಾಂತಕನೆಂಬ
ಮಾವುಲಿಗನೊಬ್ಬನ
ಬಲೆಯಲ್ಲಿ ಬಂಧಿಯಾಗುವ
ಸಮಯದಲ್ಲೂ
ಇರಬೇಕು
ಬರೀ ಕನಸುಗಳು ...
ವಿನಾಶಿ ಬದುಕಿನ
ವ್ಯಾಕುಲತೆಗಳಲ್ಲ ..
No comments:
Post a Comment