ಮುತ್ತಾತ
ದಿನವೂ ಕರ ಮುಗಿದು
ಪ್ರಾರ್ಥಿಸುತಿರಲು
ಪಕ್ಕದಲಿ
ನಾ ಕೇಳಿಸುತಿದ್ದೆ
ಒಂದೆರಡು ಗುನುಗುವ
ಶಭ್ದಗಳು ..
ಟೀವಿ -ಧಾರಾವಾಹಿ ..
ಉದ್ದೇಶವನರಿಯಲು
ಉತ್ಸುಕುದಲಿ
ಕೇಳಲು
ಕೊನೆಗೂ
ಹೇಳಿದರು
ವಿವರವಾಗಿ ...
'ಒಡೆಯಾ ...
ಟೀವಿಯಲಿ
ಧಾರವಾಹಿ
ಸಂಪ್ರೇಕ್ಷಣೆಯ ಸಮಯದಲಿ
ಕಳುಹಿಸದಿರು
ಜವರಾಯನ ...
ಪ್ರಾಣ ಪಕ್ಷಿ ಹಾರುವ ಸಮಯದಲಿ ..
ಮಕ್ಕಳು-ಮೊಮ್ಮಕ್ಕಳು
ತಂದು ಕೊಡರು ..
ಒಂದು ಲೋಟ ನೀರು
ನಾ ಬೊಬ್ಬಿಟ್ಟರೂ .. '
ಅದ ಕೇಳಿ
ನಾನೂ ಪ್ರಾರ್ಥಿಸತೊಡಗಿದೆ
ನೆರವೇರಲೆಂದು
ಅವರ ಅಭಿಲಾಷೆ ... .
'ಜಾಹಿರಾತಿನ
ಸಮಯವ ನೋಡಿ
ನೀ
ಕಳುಹಿಸು ..
ಜವರಾಯನ ...
ಕೊನೆಗಳಿಗೆಯಲಿ
ನೀರು ಕುಡಿದು
ಸಾಯುವಾಸೆಯಿದೆಯಂತೆ
ಮುತ್ತಾತನಿಗೆ ..... '
ದಿನವೂ ಕರ ಮುಗಿದು
ಪ್ರಾರ್ಥಿಸುತಿರಲು
ಪಕ್ಕದಲಿ
ನಾ ಕೇಳಿಸುತಿದ್ದೆ
ಒಂದೆರಡು ಗುನುಗುವ
ಶಭ್ದಗಳು ..
ಟೀವಿ -ಧಾರಾವಾಹಿ ..
ಉದ್ದೇಶವನರಿಯಲು
ಉತ್ಸುಕುದಲಿ
ಕೇಳಲು
ಕೊನೆಗೂ
ಹೇಳಿದರು
ವಿವರವಾಗಿ ...
'ಒಡೆಯಾ ...
ಟೀವಿಯಲಿ
ಧಾರವಾಹಿ
ಸಂಪ್ರೇಕ್ಷಣೆಯ ಸಮಯದಲಿ
ಕಳುಹಿಸದಿರು
ಜವರಾಯನ ...
ಪ್ರಾಣ ಪಕ್ಷಿ ಹಾರುವ ಸಮಯದಲಿ ..
ಮಕ್ಕಳು-ಮೊಮ್ಮಕ್ಕಳು
ತಂದು ಕೊಡರು ..
ಒಂದು ಲೋಟ ನೀರು
ನಾ ಬೊಬ್ಬಿಟ್ಟರೂ .. '
ಅದ ಕೇಳಿ
ನಾನೂ ಪ್ರಾರ್ಥಿಸತೊಡಗಿದೆ
ನೆರವೇರಲೆಂದು
ಅವರ ಅಭಿಲಾಷೆ ... .
'ಜಾಹಿರಾತಿನ
ಸಮಯವ ನೋಡಿ
ನೀ
ಕಳುಹಿಸು ..
ಜವರಾಯನ ...
ಕೊನೆಗಳಿಗೆಯಲಿ
ನೀರು ಕುಡಿದು
ಸಾಯುವಾಸೆಯಿದೆಯಂತೆ
ಮುತ್ತಾತನಿಗೆ ..... '
No comments:
Post a Comment