ದೂರ ಪ್ರಯಾಣ
ಮಾಡುವಾಗ
ನಡುದಾರಿಯಲ್ಲಿ
ವಿಶ್ರಾಂತಿ ಪಡೆಯಲು
ಗೂಡಂಗಡಿ ಬಳಿ
ವಾಹನ ನಿಲ್ಲಿಸಿ
ಸಿಗರೇಟು ಹಚ್ಚುವಾಗ
ಅಂಗಡಿಯಾತನಲ್ಲಿ
ಸುಮ್ಮನೆ
ಕೇಳಿದೆ ....
ಹೇಗಿದೆ ವ್ಯಾಪಾರ .... ??
ಪಕ್ಕದಲಿದ್ದ
ಎಳನೀರು, ದಾಳಿಂಬೆ
ಚಾಕಲೇಟು
ಬೀಡಿ ಸಿಗರೇಟು ತೋರಿಸಿ
ಅವನೆಂದ ...
ಬೆಳಿಗ್ಗಿಂದ ಇಷ್ಟೆಲ್ಲಾ
ವಿಷಯ ತಂದು
ಪೋಸ್ಟ್ ಮಾಡಿದ್ದೇನೆ ...
ವಿಸಿಟರ್ಸ್ ಕಮ್ಮಿ ..
ಒಂದು ಲೈಕೊ ಇಲ್ಲ
ಕಾಮೆಂಟ್ಸೂ ಇಲ್ಲ ...
1 comment:
ಕನ್ನಡ ಬರವಣಿಗೆಗಳಿಗೆ ಸದಾ ಪ್ರೊತ್ಸಾಹ ಕೊಡುವವರು ನಾವು.
Post a Comment