Saturday, 25 January 2014

ಭಾರತಾಂಬೆ..


ಭಾರತಾಂಬೆಯ
ಶಾಂತಿಯ ಬಿಂಬಿಸುವ 
ಏಕತೆಯ ಸಾರುವ 
ರಾಷ್ಟ್ರ ದ್ವಜದ 
ಬಣ್ಣಗಳಿಗೆ 
ಹಚ್ಚದಿರಿ
ಜಾತಿ-ಧರ್ಮದ
ಬಣ್ಣ ...

ಕೇಸರಿಗೊಂದು
ವಾರಸುದಾರ ..
ಹಸಿರಿಗೊಂದು
ವಾರಸುದಾರ ...

ಹಸಿರು-ಕೇಸರಿಯು
ನುಜ್ಜು-ಗುದ್ದಾಡಿದೊಡೆ
ನಡುವಲಿರುವ
ಶಾಂತಿಯ ಸಂಕೇತ
ಶ್ವೇತ ವರ್ಣ-
ಅಹಿಂಸೆಯ ಸಂಕೇತ
ಅಶೋಕ ಚಕ್ರ
ಬಡವಾದೀತು ....

No comments: